Top News

ಲಾಡ್ಜ್ನಲ್ಲಿ ವೇಶ್ಯಾವಾಟಿಕೆ: ಐವರು ಬಂಧನ, ಇಬ್ಬರು ಮಹಿಳೆಯರ ರಕ್ಷಣೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಐವರನ್ನು ಬಂಧಿಸಿ, ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ. ಬಂಧಿತರು ಅನಿಲ್ ಜಾಧವ (ಕೋಳೂರು ತಾಂಡಾ), ಲಾಡ್ಜ್ ಮ್ಯಾನೇಜರ್ ರಘುನಾಥ ಶೆಟ್ಟಿ (ಉಡುಪಿ), ದಿನೇಶ ಶೆಟ್ಟಿ (ಕಾಪು), ಗೌತಮ (ಚಿಕ್ಕಮಗಳೂರು) ಮತ್ತು ಭೀಮರಾಯ ಬೂದಿಹಾಳ (ಯಾದಗಿರಿ) ಎನ್ನಲಾಗಿದ್ದು, ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

ನವೀನ ಹಳೆಯದು