ವಿಜಯಪುರ / ಹೆದ್ದಾರಿ ದಾಟುವಾಗ ಲಾರಿ ಹಾಯ್ದು ವ್ಯಕ್ತಿ ಸಾವು

 ವಿಜಯಪುರ: ಹೆದ್ದಾರಿ ದಾಟುವಾಗ ಲಾರಿ ಹಾಯ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟವನನ್ನು ಹೊರ್ತಿ ಗ್ರಾಮದ ನಿವಾಸಿ  ಶ್ರೀಶೈಲ ಮಸಳಿಕೇರಿ ಎಂದು ಗುರುತಿಸಲಾಗಿದೆ.

ಅಲ್ಲದೇ, ಇನ್ನೊರ್ವ ವ್ಯಕ್ತಿ ರಮೇಶ ತಳಕೇರಿ ಗಂಭೀರವಾಗಿ  ಗಾಯಗೊಂಡಿದ್ದಾನೆ. ಗಾಯಗೊಂಡಿರುವ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ‌. 

ಸ್ಥಳಕ್ಕೆ ಹೊರ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post a Comment

ನವೀನ ಹಳೆಯದು