Top News

ರಮೇಶ್ ಬಾಬು ನಾಮನಿರ್ದೇಶನಕ್ಕೆ ತೇಜಸ್ ಗೌಡ ವಿರೋಧ


ವಿಧಾನಪರಿಷತ್ ಗೆ ರಮೇಶ್ ಬಾಬು ಅವರನ್ನು ನಾಮನಿರ್ದೇಶನ ಮಾಡದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಜಾರಿ ನಿರ್ದೇಶನಾಲಯಕ್ಕೆ ತೇಜಸ್ ಗೌಡ ಸೋಮವಾರ ದೂರು ನೀಡಿದ್ದಾರೆ. ರಮೇಶ್ ಬಾಬು ಕ್ರಿಮಿನಲ್ ಹಿನ್ನೆಲೆಯವರಾಗಿದ್ದು, ಭೂಕಬಳಿಕೆ ಪ್ರಕರಣವೊಂದರಲ್ಲಿ ಆರೋಪಿಗಳಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸಂವಿಧಾನದ ವಿಧಿ 171(5)ನ ಪ್ರಕಾರ, ನಾಮನಿರ್ದೇಶನಕ್ಕೆ ಅರ್ಹತೆ ಇಲ್ಲವೆಂದು ಅವರು 100ಕ್ಕೂ ಹೆಚ್ಚು ಪುಟಗಳ ದಾಖಲೆಗಳೊಂದಿಗೆ ಮನವಿ ಸಲ್ಲಿಸಿದ್ದಾರೆ.

Post a Comment

ನವೀನ ಹಳೆಯದು